ನಮ್ಮ ಸಮಾಜದಲ್ಲಿ ಕಳ್ಳರ್ಯಾರು, ಪೋಲಿಸರ್ಯಾರು ಅಂತಾ ಪತ್ತೆ ಹಚ್ಚುವುದು, ಎದುರಿಗೆ ನಿಂತವರಲ್ಲಿ ಒಳ್ಳೆಯವರ್ಯಾರು, ಕೆಟ್ಟವರ್ಯಾರು ಎಂದು ಗುರುತಿಸುವಷ್ಟೇ ಕಷ್ಟದ ಕೆಲಸ. ಖಾಕಿ ತೊಟ್ಟವರೆಲ್ಲ ಪೋಲಿಸರು ಎಂದು ಭಾವಿಸಿದರೆ, ಗರಿ-ಗರಿ ಖಾದಿ ತೊಟ್ಟವರನ್ನು ಒಳ್ಳೆಯವರೆಂದು ಭಾವಿಸಿ ಮೋಸ ಹೋದ ಕುರಿಗಳ ಸಾಲಿಗೆ ನಾವೂ ಸೇರಿಬಿಡುತ್ತೇವೆ! ಅದೇನೆ ಇರಲಿ, ಕಥೆ ಏನಪ್ಪ ಅಂದ್ರೆ, ನಾನು ಮೊನ್ನೆ ರಾತ್ರಿ ೮ಗಂಟೆ ನಂತರ ಮೆಜಸ್ಟಿಕ್ ಸುತ್ತ-ಮುತ್ತ ಒಂದು ರೌಂಡ್ ಹಾಕಿ ಬಂದೆ. ಬೆಂಗಳೂರಿಗೆ ಬಂದು ೩ ವರ್ಷ ಆಯಿತು ಅಂತಾ ಹೇಳಿಕೊಳ್ಳಲು ನನಗೆ ನಿಜಕ್ಕೂ ನಾಚಿಕೆಯಾಗತ್ತೆ. ಗಾಂ ನಗರವನ್ನೇ ನಾನಿನ್ನು ಸರಿಯಾಗಿ ನೋಡಿಲ್ಲ. ಅಸೈನ್ಮೆಂಟ್ ಇದ್ದಾಗ ಹೊರಗಡೆ ಹೋಗುವುದು ಬಿಟ್ಟರೆ, ಮತ್ತೆ ತಿರುಗಾಡುವುದು ಬಹಳ ಕಡಿಮೆ. ಹಾಗಾಗಿಯೇ ಇವತ್ತಿಗೂ ಲಾಲ್ಬಾಗ್ ಸರಿಯಾಗಿ ಗೊತ್ತಿಲ್ಲ. ವಿಶ್ವೇಶ್ವರಯ್ಯ ಮ್ಯೂಸಿಯಂ ಅಂತಾ ಒಂದಿದೆಯಂತೆ ಎಂದು ಕೇಳಿದ್ದೇನಷ್ಟೆ!
ಮೊನ್ನೆ ಮೆಜೆಸ್ಟಿಕ್ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲಿ ಟ್ರಾಫಿಕ್ ಜಾಮ್ ಆದ್ರೆ, ಕ್ಲಿಯರ್ ಆಗಲು ಎಷ್ಟು ಹೊತ್ತು ಬೇಕಾಗಬಹುದೆಂಬ ಸ್ಪಷ್ಟವಾದ ಅರಿವಿದೆ. ಯಾಕೆಂದ್ರೆ, ಈ ಹಿಂದೆ ೩-೪ ಸಲ ಗಂಟೆಗಟ್ಟಲೆ ಬಸ್ ಒಳಗೆ ಕುಳಿತು ಜಪ ಮಾಡಿದ್ದಿದೆ. ಹಗಲಾದ್ರೆ ಆಚೆ-ಈಚೆ ತಿರುಗಾಡೋ ಚೆಂದದ ಹುಡುಗಿಯರಿಗೆ ಲೈನ್ ಹಾಕಿಕೊಂಡಾದ್ರೂ ಹೊತ್ತು ಕಳೆಯಬಹುದಿತ್ತು! ಆದ್ರೆ, ರಾತ್ರಿ ಅದು ಸಾಧ್ಯವಿಲ್ಲ ಅಂದುಕೊಳ್ಳುವ ಹೊತ್ತಿಗೆ ನ್ಯಾಷನಲ್ ಮಾರ್ಕೇಟ್ ನೆನಪಿಗೆ ಬಂತು. ಅದನ್ನು ನಾನು ಕೇಳಿದ್ದೆ, ಆದ್ರೆ ಕಣ್ಣಾರೆ ನೋಡಿರಲಿಲ್ಲ. ಯಾಕೆ ಇವತ್ತು ಆ ಕೆಲಸ ಮಾಡಬಾರದು ಅಂದುಕೊಂಡು ಗೆಳಯನಿಗೆ ಫೋನ್ ಮಾಡಿದ್ರೆ, ಅವನಿಗೆ ಸರಿಯಾಗಿ ಅಡ್ರೆಸ್ ಹೇಳಲಿಕ್ಕೆ ಬರುವುದಿಲ್ಲ. ಯಾಕಂದ್ರೆ ಅವ ಸೂಚಿಸುತ್ತಿರುವ ಲ್ಯಾಂಡ್ ಮಾರ್ಕ್ಗಳ್ಯಾವುದೂ ನನಗೆ ಪರಿಚಯವಿಲ್ಲ! ಕಾನಿಷ್ಕ ಹೋಟೆಲ್, ಸ್ವಪ್ನ ಬುಕ್ ಹೌಸ್ ಎರಡೇ ಗಾಂದಿನಗರದಲ್ಲಿ ನನಗೆ ಗೊತ್ತಿರುವುದು. ನನ್ನ ಹತ್ತಿರ ಬೈಸಿಕೊಳ್ಳುತ್ತಲೇ ಅಡ್ರೆಸ್ ಹೇಳಿದ ಅವ.
ಹರಸಾಹಸ ಮಾಡಿಕೊಂಡು ನ್ಯಾಷನಲ್ ಮಾರ್ಕೇಟ್ ಕಡೆ ಹೆಜ್ಜೆ ಹಾಕಿದೆ. ಜೀನ್ಸ್ ಪ್ಯಾಂಟ್ ಧರಿಸಿದ್ದರಿಂದ, ಕಿಸೆಯೊಳಗಿನ ಮೊಬೈಲನ್ನೂ ಯಾರು ಖದಿಯಲು ಸಾಧ್ಯವಿಲ್ಲ ಎಂಬ ಧೈರ್ಯ. ಆದ್ರೂ, ಈ ಬೆಂಗಳೂರಲ್ಲಿ ಮೊಬೈಲ್ ಖದಿಯುವವರ ಕಥೆ ರೋಮಾಂಚನಕಾರಿಯಾಗಿದೆ. ಅದನ್ನ ಮತ್ತೊಮ್ಮೆ ಹೇಳ್ತಿನಿ. ನ್ಯಾಷನಲ್ ಮಾರ್ಕೇಟ್ನ ದರ್ಶನ ಪಡೆದು, ವಾಪಸ್ ಹೊರಟಾಗ…ಈ ರಸ್ತೆ ಯಾವ ಕಡೆ ಹೋಗಿ ಸೇರಿಬಹುದು ಎಂಬ ಕುತುಹಲ ಶುರುವಾಯಿತು. ನಾನು ಅಪರಿಚಿತ ಸ್ಥಳಕ್ಕೆ ಹೋದ್ರೆ, ಅಕ್ಕ-ಪಕ್ಕದ ರಸ್ತೆಗಳತ್ತ ಒಮ್ಮೆ ಕಣ್ಣಾಡಿಸಿ ಬರುತ್ತೇನೆ. ಮುಂದಿನ ಸಲ ಗೆಳೆಯರಿಗೆ ಫೋನ್ ಮಾಡಿ ಮತ್ತೆ ಬೈಸಿಕೊಳ್ಳುವ ಸಾಹಸ ಬೇಡ ಎಂಬ ಉದ್ದೇಶದಿಂದ. ನಾನು ಅಂದಾಜಿಸಿದಂತೆ ಅದು ಮೈಸೂರ್ ಬ್ಯಾಂಕ್-ಮೆಜೆಸ್ಟಿಕ್ ನಡುವಣ ರಸ್ತೆಯಾಗಿತ್ತು. ಜನತಾ ಬಜಾರ್ನಿಂದ ಒಳಗೆ ಹೋದ್ರೆ, ಆನಂದ್ ರಾವ್ ಸರ್ಕಲ್ನಿಂದ ನೆಟ್ಟಗೆ ಹೊರಟರೆ ಗಾಂ ನಗರ ಸಿಗತ್ತೆ ಅಂತಾ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಳ್ಳುತ್ತಾ, ಎಲ್ಲೋ ನೋಡುತ್ತಾ ಹೆಜ್ಜೆ ಹಾಕುತ್ತಿದೆ…ಬರ್ತಿಯೇನಪ್ಪ ಅಂದ್ಲು ಒಬ್ಬಳು ಹುಡುಗಿ…ಅಲ್ಲಲ್ಲ ಆಂಟಿ! ಒಂದು ಕ್ಷಣ ನನಗೆ ಏನು ಅರ್ಥವಾಗಲಿಲ್ಲ. ಆಮೇಲೆ ಗೊತ್ತಾಯಿತು, ನಾನು ಬೆಂಗಳೂರಿನ ಪರಿಶುದ್ಧ ಕೆಂಪು ಬೀದಿಯಲ್ಲಿ ಹೋಗುತ್ತಿದ್ದೇನೆ ಅಂತಾ.
ಪ್ರತಿ ಸಲ ಹಬ್ಬಕ್ಕೆ ಹೊರಟಾಗ್ಲೂ ಮೆಜೆಸ್ಟಿಕ್ ಬಳಿ ಟ್ರಾಫಿಕ್ ಜಾಮ್ ಆಗಿರತ್ತೆ. ಹಾಗಾಗಿ ಮೈಸೂರು ಬ್ಯಾಂಕ್ ಬಳಿ ಇಳಿದು, ಅಲ್ಲಿಂದ ನಡೆದು ಹೋಗುವುದು ಅಭ್ಯಾಸವಾಗಿದೆ. ಆ ರಸ್ತೆ ಒಂತರಹ ಸೂಳೆಯರ ಬೀದಿ ಅನ್ನೋದು ೨ ವರ್ಷದ ಹಿಂದೆ ಗೊತ್ತಾಗಿತ್ತು. ಆದ್ರೆ ಗಾಂನಗರದ ಗಲ್ಲಿಯಲ್ಲೂ ಈ ದಂಧೆ ನಡೆಯತ್ತಾ ಅಂತಾ ಯೋಚಿಸುತ್ತಿರುವಾಗ…ಎದುರಿಗೊಬ್ಬ ಪೋಲಿಸ್ ಪ್ಯಾದೆ ಕಂಡ. ಅವನೆದುರಿಗೆ ಆಕೆ ರಾಜಾರೋಷವಾಗಿ ವ್ಯಾಪಾರ ಕುದುರಿಸುತ್ತಿದ್ದಳು. ಇದನ್ನೆಲ್ಲ ೨ ನಿಮಿಷ ಸುಮ್ಮನೆ ನಿಂತು ನೋಡಿದೆ…ಅದಕ್ಕೆ ನನಗೆ ಕಳ್ಳರು ಮತ್ತು ಪೋಲಿಸರ ನಡುವಣ ವ್ಯತ್ಯಾಸ ಅರ್ಥವಾಗದೆ ಇದ್ದಿದ್ದು. ಇನ್ನೂ ಸಾಕಷ್ಟು ಕಾರಣ, ಘಟನೆಗಳಿಂದಾಗಿ ನನಗೆ ಪೋಲಿಸ್ ಮತ್ತು ಕಳ್ಳರನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಅವೆಲ್ಲವನ್ನೂ ಇಲ್ಲಿ ವಿವರಿಸಲು ಸಾಧ್ಯವಿಲ್ಲ…ಅಂದುಕೊಳ್ಳುವ ಹೊತ್ತಿಗೆ ನಮ್ಮೂರಿನ ಅವಾಂತರದ ಅಶೋಕಣ್ಣ ನೆನಪಾದ. ಅವನಿಗೆ ನಾನು ಈ ಹೆಸರಿಡಲು ಒಂದು ಕಾರಣವಿದೆ.
ನಾನು ಉಡುಪಿಯಲ್ಲಿ ಡಿಗ್ರಿ ಓದ್ತಾ ಇರೋವಾಗ ಎಂ.ಎಫ್ ಹುಸೇನ್ ಭಾರತ ಮಾತೆಯ ಬೆತ್ತಲು ಚಿತ್ರ ಬಿಡಿಸಿದ್ದ. ಅದನ್ನ ಗಿರೀಶ್ ಕಾರ್ನಾಡ್ ಎಂಬ ಮಹಾಶಯರೊಬ್ಬರು ಸಮರ್ಥಿಸಿಕೊಂಡಿದ್ದರು. ಕಲಾವಿದನಿಗೆ ಆ ಹಕ್ಕಿದೆ ಎಂದಿದ್ದರು. ನಿಮ್ಮ ಹೆಂಡತಿಯದ್ದೋ, ಸಹೋದರಿಯದ್ದೋ ಬೆತ್ತಲೆ ಚಿತ್ರ ಬರೆದರೆ, ಆಗ ಕಲೆಯನ್ನು ಸ್ವಾಗತಿಸುವಿರಾ ಎಂಬ ಪ್ರಶ್ನೆಯಿಟ್ಟು ಒಂದು ಲೇಖನ ಬರೆದಿದ್ದೆ. ಅದನ್ನು ಹೊಸದಿಗಂತ ಪತ್ರಿಕೆ ಪ್ರಕಟಿಸಿತ್ತು. ಇದರ ನಡುವೆ, ಅಲ್ಲಿನ ಎಬಿವಿಪಿ ಘಟಕದವರು ಕಾರ್ನಾಡ್ ಹೇಳಿಕೆ ವಿರೋಸಿ ಉಡುಪಿ ಸಿಟಿ ಬಸ್ ಬಸ್ಸ್ಟ್ಯಾಂಡ್ನಲ್ಲಿ ಪ್ರತಿಭಟನಾ ಸಭೆ ಆಯೋಜಿಸಿದ್ದರು. ನನ್ನ ಲೇಖನ ಓದಿದ ಹಿರಿಯರೊಬ್ಬರು ಆ ಸಭೆಗೆ ಬನ್ನಿ, ಮಾತಾಡಿ ಅಂತಾ ಕರೆದಿದ್ದರು. ಹಾಗಾಗಿ ನಾನು ಹೋಗಿದ್ದೆ. ಸಭೆ ಸುತ್ತಲು ಪೋಲಿಸ್ ಕಾವಲಿತ್ತು. ನಿಂತು ಮಾತಾಡುತ್ತಿದ್ದ ಹಿರಿಯರ ಜತೆ ನಾನಿದ್ದೆ. ಇದನ್ನ ನಮ್ಮೂರಿನ ಅಶೋಕಣ್ಣ ನೋಡಿ ಬಿಟ್ಟಿದ್ದಾನೆ. ಅವನು ಎಲ್ಲಿಗೋ ಅಡುಗೆಗೆ ಅಂತಾ ಹೊರಟವನಂತೆ! ನೋಡಿಕೊಂಡು ಸುಮ್ಮನಿರಲಿಲ್ಲ. ಮನೆಗೆ ಹೋಗಿ ವರದಿ ಒಪ್ಪಿಸಿದ್ದಾನೆ.
ಸವಿತಕ್ಕ ನಿಮ್ಮನೆ ಮಾಣಿ ಉಡುಪಿ ಬಸ್ಸ್ಟಾಂಡಲ್ಲಿ ಇದ್ದಿದ್ದ. ಅವನ ಸುತ್ತಲೂ ಪೋಲಿಸ್ರು ಇದ್ದಿದ್ವಪ್ಪ ಎಂಬ ಅವನ ಅನುಮಾನಯುತ ಮಾತು ಕೇಳಿದ ಅಮ್ಮ, ಬೆವರುತ್ತ ಪೋನ್ ಮಾಡಿದಳು. ‘ಅಪಿ ಎಂಥದಾ ಪೋಲಿಸರ ಜತೆ ಇದ್ದಿದ್ಯಡಲಾ, ಏನಾತ ನಿಂಗೆ?!’ ನನಗೆ ಏನು ಅರ್ಥವಾಗ್ಲಿಲ್ಲ. ಕೊನೆಗೆ ಅಮ್ಮನೇ ವಿಷಯ ವಿವರಿಸಿದಳು…ಹುಂ, ಹೌದೆ ಅಮ, ಒಂದು ಹುಡುಗಿಗೆ ಚುಡಾಯಿಸಿದ್ದಕ್ಕೆ ಪೋಲಿಸರು ಎಳ್ಕಂಡು ಹೋಗಿದ್ದ ಅಂತಾ ಅಮ್ಮನಿಗೆ ರೈಲು ಹತ್ತಿಸಿದರೂ, ಕೊನೆಗೆ ವಾಸ್ತವ ವಿವರಿಸಿ ಸಮಾಧಾನ ಪಡಿಸುವಾಗ ಸುಸ್ತಾಗಿದ್ದೆ. ಆದ್ರೂ ಅಮ್ಮನಿಗೆ ನನ್ನ ಮೇಲೆ ನಂಬಿಕೆ ಬಂದಂತೆ ಕಾಣಲಿಲ್ಲ! ಅಷ್ಟರ ನಂತರ ಅವಾಂತರ ಅಶೋಕಣ್ಣನಾದ.
ಅವನೇನಾದ್ರೂ ನಾನು ಗಾಂಧಿ ನಗರದ ಗಲ್ಲಿಯಲ್ಲಿ ನಿಂತಿದ್ದನ್ನು ನೋಡಿದ್ರೆ ಅನ್ನೋ ತಲೆಹರಟೆ ಪ್ರಶ್ನೆಯೊಂದು ಮನದೊಳಗೆ ಉದ್ಭವವಾಯಿತು! ಅವನೇ ಬೇಕು ಅಂತೇನಿಲ್ಲ…ಊರು ಕಡೆಯ ಯಾರೂ ನೋಡಿದ್ರೂ ಸಾಕಿತ್ತು…ಅಂದುಕೊಳ್ಳುವಾಗ ನನ್ನ ಉಡುಪಿ ರೂಮಿನ ಗೆಳೆಯ ವಿಶ್ವಾಸನಿಗಾದ ಇಂಥದ್ದೇ ಒಂದು ಅವಾಂತರ ನೆನಪಾಯಿತು. ನಗು ಉಕ್ಕಿ ಬಂತು, ಟ್ರಾಫಿಕ್ಕು ಕ್ಲಿಯರ್ ಆಗಿರಬಹುದೆಂಬ ಆಲೋಚನೆಯೂ ಶುರುವಾಯಿತು. ಮತ್ತೆ ಮೆಜೆಸ್ಟಿಕ್ ಕಡೆಗೆ ಹೆಜ್ಜೆ ಹಾಕಿದೆ. ಅಂದುಕೊಂಡಂತೆ, ಬಸ್ಗಳು ಬುರುಗುಡುತ್ತ ಓಡಲು ಶುರುವಿಟ್ಟಿದ್ದವು…
Hehe.. Gud gud..
Hheheh Good one man…
Keshava Prasad M
http://sihimaatu.wordpress.com
Gud one
hmm. correct. ಅನುಭವಗಳನ್ನು ಚೆನ್ನಾಗಿ ಬರೆದಿದ್ದೀರಿ .