Feed on
Posts
Comments

Archive for the ‘ಪುರೋಹಿತರ ಪಂಚಾಮೃತ!!!’ Category

ಕರ್ನಾಟಕದಲ್ಲೂ ಗಾಂಧಿಗಿರಿ ಆರಂಭವಾಯಿತಾ ಗುರು?
ಆದ್ರೆ ಕೃಷ್ಣ ಮಹಾರಾಷ್ಟ್ರ ಬಿಟ್ಟು ಬಂದಿದ್ದು ವೇಸ್ಟ್ ಆಗತ್ತೆ!
*******
ದೇವೆಗೌಡ್ರು ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಾರಂತೆ?
ಸೂರ್ಯ ಪಶ್ಚಿಮದಲ್ಲಿ ಹುಟ್ಟೋ ದಿನವೆ ಒಳ್ಳೆ ಮೂಹೂರ್ತ ಅಂದಿದಾರಂತೆ ಜೋಯ್ಸರು!
***********
ಕುಮಾರಸ್ವಾಮಿ ಚೈತ್ರಯಾತ್ರೆ ಆರಂಭಿಸಿದ್ದಾರಂತೆ?
ಯಡ್ಯೂರಪ್ಪಾ “ಶೋಭಾ”ಯಾತ್ರೆ ಆರಂಭಿಸುತ್ತಾರಂತೆ!
************
ನೈಪಾಲ್ ಹೆಂಡ್ತಿಗೆ ಕಿರುಕುಳ ಕೊಡುತ್ತಿದ್ದನಂತೆ?
ಅದು ಬರಹಗಾರನ ಹೊಸತನ ಅಂದ್ರಂತೆ ಬಲ್ಲವರು!
**********
ಯಡ್ಯೂರಪ್ಪಾಗೆ ಈ ಭಾರಿ ಟಿಕೇಟ್ ಇಲ್ಲವಂತೆ?
ಹಾಗಂತ ಅನಂತ್‌ಕುಮಾರ ಆಪ್ತರಬಳಿ ಹೇಳಿದ್ದಾರಂತೆ!
**********
ಬ್ಲಾಗಿನಲ್ಲಿ ನೈಪಾಲ್ ಕುರಿತು ಕಾಳಗವಂತೆ?
ಅದು ಓದು, ಬರಹ ಎರಡು ಬಲ್ಲವರಿಗೆ ಮಾತ್ರ!

Read Full Post »

ಸ್ನೇಹಿತರೆ ಪಂಚಾಮೃತ ಅನ್ನೋ ಈ ಕಾಲಂ ಸುಮ್ನೆ ಕ್ರೇಜಿಗೆ ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ.
                                                                                                                                                                                              ಇಂತಿ ನಿಮ್ಮವ
ಸರ್ಕಾರಿ ನೌಕರರಿಗೂ ಇನ್ಮೇಲೆ ವಾರಕ್ಕೆರಡು ದಿನಾ ರಜವಂತೆ ಹೌದಾ?
      ಛೇ ಒಂದು ದಿನದ ಲಂಚ ಮಿಸ್ಸಾಗಿಹೋಯಿತು ಅಂದ್ರಂತೆ ಕೆಲ ಅಧಿಕಾರಿಗಳು!
                                                                                    *****
ಗಣೇಶ ರಾತ್ರಿ ಮದ್ವೆಯಾಗಿದ್ದು ಯಾಕೆ?
ಹುಡುಗಿಯರೆಲ್ಲಾ ಮಲಗಿರ್ತಾರೆ ಅಂತಿರಬೇಕು!
                                                                           *****
ಚಂಪಾ ಹೊಸ ಪಕ್ಷ ಕಟ್ಟುತ್ತಾರಂತೆ ಹೌದಾ?
ಅನಂತಮೂರ್ತಿಗಳು ರಾಜ್ಯಾಧ್ಯಕ್ಷರಂತೆ!
                                                    *****
ಈ ಭಾರಿ ಬಜೆಟ್ ರೈತ ಪರವಾ?
ಹಾಗಂತ ಯು.ಪಿ.ಎ ಹೇಳಿಕೊಳ್ಳುತ್ತಿದೆ!
                                              *****
ಮಲ್ಲಿಕಾ ಶರಾವತ್ ಕನ್ನಡಕ್ಕೆ ಬರ್ತಾಳಂತೆ ಗುರು?
ಹಾಗಾದ್ರೆ ರವಿಚಂದ್ರನ್ ಹೊಸ ಸಿನಿಮಾ ಶುರುಮಾಡಿರಬೇಕು!
                                                            *****
ಅನಂತಮೂರ್ತಿಯವರ [...]

Read Full Post »