ಸಂವಾದವಿರಲಿ, ವಿವಾದ ಬೇಡ…
April 25, 2008 by aksharavihaara
ನಮಸ್ಕಾರ.
ನಾನು ಇತ್ತೀಚೆಗೆ ಠಕ್ಕ ಠಿಕ್ಕ ಮತ್ತು ಸಾಧು ಅನ್ನುವ ಲೇಖನವನ್ನ ‘ಕಥೆ-ವ್ಯಥೆ’ ಕಾಲಮ್ಮಿನಡಿಯಲ್ಲಿ ಬರೆದಿದ್ದೆ. ಅದು ಯಾವುದೇ ಆದರ್ಶ ಹೊತ್ತು ಪತ್ರಿಕೆ ಶುರು ಮಾಡಿದ ಗೆಳೆಯರ ಗುಂಪಿಗೆ ಹೋಲುವಂತಿತ್ತು. ಆದರೆ ನೂರಕ್ಕೆ ನೂರು ನನ್ನ ಮನಸಲ್ಲಿ ಹಾಗೆ ಬರೆಯುವಾಗ ಯಾವ ನಿರ್ದಿಷ್ಟ ವ್ಯಕ್ತಿಗಳಾಗಲೀ ಪತ್ರಿಕೆಯಾಗಲೀ ಇರಲಿಲ್ಲ.
ದುರಂತ ನೋಡಿ… ನಾನು ಯಾವ ವ್ಯಕ್ತಿಯನ್ನು ಬಹಳ ಪ್ರೀತಿಸ್ತೇನೋ ಅ ವ್ಯಕ್ತಿಯ ಹೆಸರು ಈ ಲೇಖನಕ್ಕೆ ಹೊಂದಿಕೊಂಡು ಬಂತು.
ಗೆಳೆಯನೊಬ್ಬ ಈ ಹಿಂದೆಯೇ “ಇದು ‘ಆ’ ಪತ್ರಿಕೆ ಕಥೆ ಇದ್ದ ಹಾಗಿದ್ಯೋ” ಅಂದಿದ್ದ. ಆದರೆ ಅದರಲ್ಲಿ ಠಕ್ಕರು ಯಾರೂ ಇರಲಿಲ್ಲವಾದ್ದರಿಂದ ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಎರಡು ಮೂರು ಪ್ರತಿಕ್ರಿಯೆಗಳು ಹೀಗೆ ಬಂದಿದ್ದರಿಂದ ನನಗೆ ಇದು ಮತ್ತೇನೋ ವಿವಾದ ಹುಟ್ಟುಹಾಕಲಿದೆ ಅನಿಸಿಬಿಟ್ಟಿತು. ಆಯಾ ಲೇಖಕರ ಅಭಿಮಾನಿಗಳು ಪರಸ್ಪರ ದೂರಾದೂರಿಗಿಳಿದರೆ? ಊಹೂಂ… ಅಂಥ ಕಿಡಿ ಹಚ್ಚುವ ಕೆಲಸ ನನ್ನಿಂದಾಗಬಾರದು.
ಅದಕ್ಕೇ, ನಾನು ಆ ಪೋಸ್ಟನ್ನು ಡಿಲೀಟ್ ಮಾಡಿರುವೆ. ಕಡ್ಡಾಯವಾಗಿ ಆ ಬಗೆಯ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸುವೆ. ಈ ಸಂಬಂಧ ಬರುವ ಯಾವುದೇ ಕಮೆಂಟನ್ನು ಮಾಡರೇಟ್ ಮಾಡುವುದಿಲ್ಲ.
ನನಗೆ ಸಂವಾದ ನಡೆಸುವ ಆಸೆ ಹೊರತು ವಿವಾದ ಹುಟ್ಟುಹಾಕುವುದಲ್ಲ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾಅರ್ ಕೋರುತ್ತ,
-ವಿನಾಯಕ ಕೆ.ಎಸ್.